ಗೌತಮ್ ಬುದ್ಧನ ನುಡಿಮುತ್ತುಗಳು, ವಿಚಾರಗಳು ಪ್ರೇಮದ, ಧ್ಯಾನದ, ತಾಳ್ಮೆಯ ಮೇಲಿನ ನುಡಿಮುತ್ತುಗಳು (Gautama Buddha Quotes,on love, meditation, in Kannada)

ಗೌತಮ್ ಬುದ್ಧನ ಇವರು ಬೌದ್ಧಧರ್ಮದ ಸಂಸ್ಥಾಪಕರು.ಬೌದ್ಧಧರ್ಮವು ಜನರು ಭಾರತ, ನೇಪಾಳ,ಚೀನಾ, ಕಾಂಬೋಡಿಯಾ,ಬರ್ಮಾ, ಫಿಲಿಪ್ಪೀನ್ಸ್ ಇನ್ನೂ ಮುಂತಾದ ದೇಶಗಳಲ್ಲಿ ನೆಲೆಸಿದ್ದಾರೆ.ಬುದ್ಧ ಹುಟ್ಟಿದ್ದು ಲುಂಬಿನಿಯಲ್ಲಿ ಆಗಿನ ನೇಪಾಳದ ಪ್ರದೇಶ.
ಗೌತಮ್ ಬುದ್ಧನು ತನ್ನ ಸರಳವಾದ ಮಾತು, ವಚನಗಳಿಂದ ಪ್ರಸಿದ್ಧರಾಗಿದ್ದಾರೆ. ಇವರು ‘ಆಸೆಯೆ ಎಲ್ಲಾ ದುಃಖಕ್ಕೆ ಮೂಲ ಕಾರಣ’ವಾಗಿದೆ ಮತ್ತು ಯಾವ ಮನುಷ್ಯನೂ ವಸ್ತುವಿನ ಮೇಲೆ ವ್ಯಾಮೋಹ ಹೊಂದಿರಬಾರದು, ಒಂದುವೇಳೆ ಹೊಂದಿದ್ದರೆ ಅವನು ಸಂತೋಷದಿಂದ ಇರಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.
ಗೌತಮ್ ಬುದ್ಧನ ಕೆಲವು ಅಮೂಲ್ಯವಾದ ನುಡಿಮುತ್ತುಗಳನ್ನು ಪಟ್ಟಿ ಮಾಡಿದ್ದೇವೆ, ನೋಡೋಣ ಬನ್ನಿ.
ಗೌತಮ್ ಬುದ್ಧನ ಒಳ್ಳೆಯ ನುಡಿಮುತ್ತುಗಳು (Gautama Buddha best Quotes in Kannada)
Table of Contents
- ಆಸೆಯೆ ದುಃಖಕ್ಕೆ ಮೂಲ ಕಾರಣ.

2. ನಾನು ಏನು ಮಾಡಿದ್ದೇನೆ ಎಂದು ನೋಡುವುದಿಲ್ಲ, ಇನ್ನೂ ನಾನು ಏನು ಮಾಡಬೇಕೆಂದು ನೋಡುತ್ತೇನೆ. – ಬುದ್ಧ
3. ನಿಮ್ಮ ಜೀವನದ ಉದ್ದೇಶವು, ನಿಮ್ಮ ಉದ್ದೇಶವನ್ನು ಕಂಡುಕೊಂಡು ಅದಕ್ಕೆ ನಿಮ್ಮ ಸಂಪೂರ್ಣ ಆತ್ಮ ಮತ್ತು ಹೃದಯವನ್ನು ನೀಡುವುದಾಗಿದೆ.
4. ಪ್ರತಿ ಮನುಷ್ಯನು ತನ್ನ ಸ್ವಂತ ಆರೋಗ್ಯ ಅಥವಾ ಕಾಯಿಲೆಯ ಲೇಖಕನಾಗಿದ್ದಾನೆ.
5. ನಮ್ಮ ಪ್ರಪಂಚವನ್ನು ನಮ್ಮ ಯೋಚನೆಯಿಂದ ಶೃಷ್ಟಿ ಮಾಡಬಹುದು.
6. ತಾಳ್ಮೆಯಿಂದಿರು ಸರಿಯಾದ ಸಮಯದಲ್ಲಿ ಎಲ್ಲವೂ ನಿನ್ನ ಹತ್ತಿರ ಬರುತ್ತದೆ.
ಗೌತಮ್ ಬುದ್ಧನ ವಿಚಾರಗಳು (Best Quotes of Buddha in Kannada)
5. ತಾಳ್ಮೆಯೆ ಅತಿ ದೊಡ್ಡ ಪ್ರಾರ್ಥನೆ.

7. ಯಾವುದೂ ಸಂಪೂರ್ಣವಾಗಿ ಏಕಾಂಗಿಯಾಗಿ ಅಸ್ತಿತ್ವದಲ್ಲಿಲ್ಲ; ಎಲ್ಲವೂ ಎಲ್ಲದಕ್ಕೂ ಒಂದಕ್ಕೊಂದು ಸಂಬಂಧಿಸಿದೆ.
8. ನೀವು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ನೀವು ಎಂದಿಗೂ ಇನ್ನೊಬ್ಬರನ್ನು ನೋಯಿಸುವುದಿಲ್ಲ.
9. ಸಮಸ್ಯೆ ಏನೆಂದರೆ, ನಿಮಗೆ ಇನ್ನೂ ಸಮಯವಿದೆ ಎಂದು ಭಾವಿಸುತ್ತಿರಿ.
10. ನಿಮ್ಮ ಮೆದುಳನ್ನು ಪಲಾಗಿಸುವುದನ್ನು ಕಲಿತುಕೊ ಎಲ್ಲಾ ಹೋದರೆ ಅದು ನಿನ್ನನ್ನು ಪಳಗಿಸುವುದನ್ನು ಕಲಿತುಕೊಳ್ಳುವುದು.
11. ಸಿಸ್ತು ಬದ್ಧವಾದ ಮನಸ್ಸು ಸಂತೋಷವನ್ನು ನೀಡುತ್ತದೆ.
ಗೌತಮ್ ಬುದ್ಧನ ಜೀವನದ ಸಂದೇಶಗಳು (Gautama Buddha Quotes on life in Kannada)

12. ನೀನು ಸಾವಿರ ಯುದ್ದ ಗೆಲ್ಲುವ ಮೊದಲು ನಿನ್ನನು ನೀನು ಗೆಲ್ಲು. ಆವಾಗ ಮಾತ್ರ ನಿನಗೆ ಜಯವಾಗುತ್ತೆ.
13. ಯಾವುದೇ ವಸ್ತು ಮೇಲಿನ ಬಾಂಧವ್ಯವು (Attachment) ಹಾನಿಕಾರಕ ಮತ್ತು ವಿಷಕಾರಿ ವಿಷಯವಾಗಿದೆ.
14. ಎಲ್ಲದರಲ್ಲೂ ಒಳ್ಳೆಯದನ್ನು ನೋಡಲು ನಿಮ್ಮ ಮನಸ್ಸಗೆ ತರಬೇತಿ ಕೊಡಿ.
15. ಯಾರು ನೋಡುತ್ತಿಲ್ಲವೆಂದು ನೀವು ತಪ್ಪು ಕೆಲಸ ಮಾಡಲು ಹೋಗಬೇಡಿ, ಯಾಕೆಂದರೆ ಅದನ್ನು ನೀವು ನೋಡುತ್ತಿದ್ದೀರಿ,ವೀಕ್ಷಿಸಿ ಮತ್ತು ಕಾರ್ಯನಿರ್ವಹಿಸಿ.
ಗೌತಮ ಬುದ್ಧ ಶಾಂತಿಯ ಸಂದೇಶಗಳು (Buddha Quotes on Peace)

16. ನಿಮ್ಮ ಕೋಪಕ್ಕೆ ಶಿಕ್ಷೆಯಾಗುವುದಿಲ್ಲ, ನಿಮ್ಮ ಕೋಪದಿಂದ ನಿಮಗೆ ಶಿಕ್ಷೆ ಆಗುತ್ತದೆ.
17. ನೀವು ಬೇರೆಯವರಿಗಾಗಿ ದೀಪವನ್ನು ಬೆಳಗಿಸಿದರೆ, ಅದು ನಿಮ್ಮ ದಾರಿಯನ್ನು ಕೂಡ ಬೆಳಗಿಸುತ್ತದೆ.
18. ಮೂರು ವಿಷಯವನ್ನು ಯಾರಿಂದಲೂ ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ,ಒಂದು ಚಂದ್ರ, ಸೂರ್ಯ ಮತ್ತು ಸತ್ಯ.
19. ನಿಮ್ಮಲ್ಲಿ ಏನಿದೆ ಅದರಲ್ಲೇ ನೀವು ಸಂತೋಷವಾಗಿರಿ.
ಗೌತಮ ಬುದ್ಧ ಗೆಲುವಿನ ಸಂದೇಶಗಳು (Gautama Buddha Quotes on success in Kannada)

20. ಪ್ರತಿದಿನ ಮುಂಜಾನೆ ನಾವು ಮತ್ತೆ ಹುಟ್ಟುತ್ತೇವೆ, ಅದಕ್ಕಾಗಿ ಇಂದು ನಾವು ಏನು ಮಾಡುತ್ತೇವೆ ಎಂಬುದು ಅತಿ ಮುಖ್ಯವಾಗುತ್ತದೆ.
21. ನಾವು ಏನು ಯೋಚನೆ ಮಾಡುತ್ತೇವೆ ಅದು ಆಗುತ್ತೇವೆ, ನಮ್ಮ ಹತ್ತಿರ ಏನಿದೆ ಅದು ನಮ್ಮ ಆಲೋಚನೆಗಳಿಂದನೆ ಇದೆ,ನಮ್ಮ ಆಲೋಚನೆಗಳಿಂದ ನಾವು ಜಗತ್ತನ್ನು ರೂಪಿಸುತ್ತೇವೆ
22. ಸಂತೋಷಕ್ಕೆ ಸಂತೋಷವನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ.
23. ಹಾವು ತನ್ನ ಹಳೆಯ ಚರ್ಮವನ್ನು ಬಿಟ್ಟು ಮುಂದೆ ಸಾಗುವುದು, ಅದೇ ರೀತಿ ನಾವು ನಮ್ಮ ಭೂತಕಾಲವನ್ನು ಬಿಟ್ಟು ಮುಂದೆ ಸಾಗಬೇಕು.
24. ನಮ್ಮನ್ನು ಹೊರತುಪಡಿಸಿ, ನಮ್ಮನ್ನು ಯಾರೂ ಕಾಪಡಲಾರರು. ನಮ್ಮ ಜೀವನದ ದಾರಿ ನಾವೇ ನಡೆಯಬೇಕು.

25. ಭೂತಕಾಲದಲ್ಲಿ ಜೀವಿಸಬೇಡಿ, ಭವಿಷ್ಯದ ಕನಸು ಕಾಣಬೇಡಿ, ನಿಮ್ಮ ಮನಸ್ಸನ್ನು ಈ ಕ್ಷಣದಲ್ಲಿ ಕೇಂದ್ರೀಕರಿಸಿ.
26. ನೀನು ಸಂತೋಷವಾಗಿರಲು ಏರಡು ಪರಿಸ್ಥಿತಯಾನ್ನು ಬದಲಾಯಿಸು,ಒಂದು ನೀನಿರುವ ಸಂದರ್ಭವನ್ನು ಬದಲಾಯಿಸು, ಏರಡನೆಯದು ಅದನ್ನು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿ.